Friday, December 18, 2009


ಪ್ರೀತಿ,
ಉ೦ಡು.ಉಟ್ಟು,ಉರಿದುಹೋಗದ
ಬಳಿದರೂ ಬರಿದಾಗದ,
ಮೊಗೆ ಮೊಗೆದರೂ ಮುದದಿ೦ದುಕ್ಕುವ,
ಚಿರಂತನ ಒರತೆ.

ಚಿರಕಾಲದಿ೦ದ
ಮನುಜನ ಮನಕ್ಕೊ೦ದು
ಮಜಬೂತಾದ ಆದಾರ.

ಪ್ರೀತಿಯಲ್ಲಿ ನೋವಿದೆ,ವಿರಹವಿದೆ,
ಅಗಲುವಿಕೆ ಇದೆ..ಇತ್ಯಾದಿ ಇತ್ಯಾದಿ
ಇತ್ತೀಚೆಗಿನ ಆರೊಪ,ಪ್ರಲಾಪ.

ಸ್ನೆಹ-ಸಹಜ,ಸು೦ದರ,ಪವಿತ್ರ
ಅ೦ತ
ಜನರೆಲ್ಲ ಬರೆದದ್ದೇ ಬರೆದದ್ದು.
ಹಾ ಹಾ ಎ೦ದು ತಲೆದೂಗಿದ್ದೇ ತೂಗಿದ್ದು.

ಸ್ನೆಹವಿಲ್ಲದೆ ಪ್ರೀತಿ ಚಿಗುರುವುದೇ?
ಪ್ರೀತಿಯಿಲ್ಲದೆ ಸ್ನೆಹ ಬಾಳುವುದೇ?

ಪ್ರೀತಿ-ಸ್ನೇಹಗಳು
ಸ೦ಬ೦ದದೆರಡು ಕಣ್ಣುಗಳು
ಜೀವನದ ಜೀವನದಿಗಳು.

ಸ್ನೇಹಗಳಿಸೋದು,ಪ್ರೀತಿ ಉಳಿಸೋದು
"ಬೀಜದಿ೦ದ ಮರವೇ?ಮರದಿ೦ದ ಬೀಜವೇ"
ಹಾಗೆ ಸುಮ್ಮನೆ ಕಾಲಹರಣ ಸ೦ಗತಿ.
"ಸ೦ತೆಯೊಳಗೊ೦ದು ಗೋವಿ೦ದ."

ಸ್ನೇಹಿತರಾಗಿ ಪ್ರೀತಿ ಸವಿಯೋಣ,
ಪ್ರೀತಿಸುತ್ತಾ ಸ್ನೇಹ ಉಳಿಸೋಣ.

ಹೃದಯ--ಮನಸಲಿ ???
( ಎದೆಯಾಳದ ಪ್ರೀತಿ,ಮನದಾಳದಸ್ನೇಹ )

ಎರಡೂ ಇರಲಿ ಸುಖವಾಗಿ
ಸಖಿಗೆ ಸಖನಾಗಿ,
ಸಖಗೆ ಸಖಿಯಾಗಿ.

ಪ್ರೀತಿ,ಸ್ನೇಹ,ಒಲವು,
ಒಳ್ಳೆಯತನ ಕ್ಕಿನ್ನೊ೦ದು ಮುಖವಾಗಲಿ
ಎಲ್ಲರದಾಗಲಿ,
ವರವಾಗಲಿ, ಸುಖ , ಶಾ೦ತಿ.
------------------------

8 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ನಿಮಗೇನು ಅನಿಸುತ್ತೆ?
ಎರಡು ಸಾಲು ಬರೀತೀರಾ?

ಸವಿಗನಸು said...

ಪ್ರೀತಿ ಹಾಗೂ ಸ್ನೇಹದ ಬಗೆ ಬಹಳ ಚೆನ್ನಾಗಿ ಬರೆದಿದ್ದೀರ....
ಚೆನ್ನಾಗಿದೆ...
ಮಹೇಶ್!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಕನಸು ಕಾಣೋ ಮನಸಿಗೊ೦ದು
ಸ್ನೇಹದಿ೦ದ,ಪ್ರೀತಿಪೂರ್ವಕ
ದನ್ಯವಾದಗಳು.

nenapina sanchy inda said...

ಪ್ರೀತಿ-ಸ್ನೇಹಗಳು
ಸ೦ಬ೦ದದೆರಡು ಕಣ್ಣುಗಳು
ಜೀವನದ ಜೀವನದಿಗಳು

ಈ ಸಾಲು ತುಂಬ ಇಷ್ಟವಾಯ್ತು.

ತುಂಬ ಮುದ್ದಾಗಿದೆ ಕವನ ವೆಂಕಟಕೃಷ್ಣ ಅವರೆ
:-)
ಮಾಲತಿ ಎಸ್.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಮಾಲತಿ ಯವರೇ,
ದನ್ಯವಾದಗಳು.ನನ್ನ ಉಳಿದ ಬರೆಹಗಳನ್ನೂ ಓದ್ತೀರಾ?
ಓದಿದಲ್ಲಿ ನಿಮಗೆ ಅನಿಸಿದ್ದು ಬರೆಯಿರಿ.

ಗೌತಮ್ ಹೆಗಡೆ said...

kavana chennagide :)

geete said...

beautiful :)

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ವೆ೦ಕಟಕೃಷ್ಣರೆ,
ಸ್ವಾರ್ಥವೇ ಮೂಲ ಉಳಿದುದೆಲ್ಲ "ಬೀಜದಿ೦ದ ಮರವೇ?ಮರದಿ೦ದ ಬೀಜವೇ"
ಎ೦ಬ ಹಾಗೆಯೆ.ಕೊನೆಗೆ ನಿಮ್ಮ ಆಶಯ ಚೆನ್ನಾಗಿದೆ.

Post a Comment