Saturday, December 11, 2010



ಅಭಿನಯ ಚತುರ.
--------------
ಹೊನ್ನಿನದ್ದದಾದರೆ
ಶೂಲವೋ,ತ್ರಿಶೂಲವೋ
ಯಾವುದಕ್ಕೂ ಸೈ..

ಬಂಗಾರದ್ದಾದರೆ
ಸರಪಳಿಯೊ,ಕೈಕೋಳವೋ
ಒತ್ತಾಯಕ್ಕೆ ಬೇಕಾದರೆ
ಎರಡೂ ಇರಲಿ...

ಪತ್ರಿಕೆ,ಬಾನುಲಿ
ಟಿವಿಯ ಕವರೇಜ್
ಸರಿಯಾಗಿದ್ದರೆ,
ಪ್ರವಚನ,ಸಂದರ್ಶನ
ಲೊಕೋದ್ಧಾರವೇ ನಮ್ಮ ಗುರಿ..

ಚಿನ್ನದ ಆಭರಣ
ಸಮರ್ಪಣೆ ಇದ್ದಲ್ಲಿ,
ನಡೆಯಲಿ ಉತ್ಸವ ಪರ್ವಕ್ಕೊಂದು..

ಮೋಹದ ಹೆಂಡತಿ
ಮನೆಯೊಳಗಿರಲು,
ಕಾವಿಯ ಬಣ್ಣ ಹೇಗಿದ್ದರೇನು..?
ಅಭಿನಯ ಚತುರನ
ದರ್ಭಾರಿನಲ್ಲಿ
ಪರಾಕ್..ಭೋ..ಪರಾಕ್!!
----------------

21 comments:

V.R.BHAT said...

ಚೆನ್ನಾಗಿದೆ ವೆಂಕಟಕೃಷ್ಣರೇ !

ಅನಂತ್ ರಾಜ್ said...

ದರ್ಬಾರಿನಲ್ಲಿ....ನಾವೂ ಭೋ ಪರಾಕ್..!

ಧನ್ಯವಾದಗಳು
ಅನ೦ತ್

Subbayya Bhat Varmudi; ಸುಬ್ಬಯ್ಯ ಭಟ್ಟ ವರ್ಮುಡಿ said...

ಚೆನ್ನಾಗಿದೆ

sunaath said...

ಹಾಸ್ಯದ ಗವಸು ಹೊದಿಸಿ ನೀಡಿದ ಪಂಚ್ ಸಕತ್ ಆಗಿದೆ!

ಸಾಗರದಾಚೆಯ ಇಂಚರ said...

ಎಂಥಹ ಮಾತುಗಳು ಸರ್
ಸಂಧರ್ಭಕ್ಕೆ ತಕ್ಕ ವೇಷ
ಇಲ್ದೆ ಹೋದ್ರೆ ''ಉದರ ನಿಮಿತ್ತಂ ಬಹುಕ್ರತ ವೇಷಂ''
ಸುಂದರ ಕವಿತೆ

Subrahmanya said...

:-). ನಿಮ್ಮ ಮನಸಿಗೆ ಸಂದರ್ಭಕ್ಕೆ ತಕ್ಕುದಾದಂತಹುದೇ ಅನಿಸಿದೆ !.

ಚಿನ್ನದ ಆಭರಣ
ಸಮರ್ಪಣೆ ಇದ್ದಲ್ಲಿ,
ನಡೆಯಲಿ ಉತ್ಸವ ಪರ್ವಕ್ಕೊಂದು..

ಶಭಾಷ್...ಚೆನ್ನಾಗಿದೆ.

Shashi jois said...

ಅಭಿನಯ ಚತುರನ ಚತುರತೆ ಸೊಗಸಾಗಿದೆ...

ಹಳ್ಳಿ ಹುಡುಗ ತರುಣ್ said...

ಅಭಿನಯ ಚತುರನ

ಪರಾಕ್..ಭೋ..ಪರಾಕ್!!

chenagide sir...

ಜಲನಯನ said...

ವಿಕೆಯವರೇ ವಾಸ್ತವ..ಮತ್ತು ಕಟುಸತ್ಯ...ಚಿನ್ನದ ಆಭರಣದ ಸಮರ್ಪಣೆ ಇದ್ದರೆ ನಡೆಯಲಿ..ಎನ್ನುವ ಛಡಿ ಏಟು...

Dr.D.T.Krishna Murthy. said...

ಸುಂದರ ಕವನ!

ತೇಜಸ್ವಿನಿ ಹೆಗಡೆ said...

good one.

anupavanje said...

ಹಾಸ್ಯದೊಳಗೊ೦ದು ಕಟು ಸತ್ಯ.........!!

ಅಪ್ಪ-ಅಮ್ಮ(Appa-Amma) said...

ವೆಂಕಟ್,

ಅಭಿನಯ ಚತುರ ಎನ್ನುವ ಹೆಸರಿಗೆ ಸಮಂಜಸವಾದ ಕವನ.

ಮನಸು said...

wow... tumba chennagide sir saalugaLu

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಓದಿ...ಪ್ರೀತಿಯಿಂದ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ನಿಮಗೆಲ್ಲ ನನ್ನ ವಂದನೆಗಳು.

ನನ್ನ ಉಳಿದ ಕವನಗಳನ್ನೂ ಪುರುಸೊತ್ತಿರುವಾಗ ಓದಿ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಜಗವೆ ನಾಟಕರ೦ಗವಾಗಿರುವಾಗ ಅಭಿನಯ ಅನಿವಾರ್ಯವೂ ಹೌದಲ್ಲವೇ..? ಚೆನ್ನಾಗಿದೆ ವೆ೦ಕಟಕೃಷ್ಣರೆ.

ಮನಸಿನಮನೆಯವನು said...

chennagide...
೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ...

ಕನಸು ಕಂಗಳ ಹುಡುಗ said...

ಬರಹ ಮಜಬೋತಾಗಿದೇ ರೀ...

ಗಿರೀಶ್.ಎಸ್ said...

vaasthavathe mattu holike chennagide

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಓದಿ...ಪ್ರೀತಿಯಿಂದ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ನಿಮಗೆಲ್ಲ ನನ್ನ ವಂದನೆಗಳು.

ನನ್ನ ಉಳಿದ ಕವನಗಳನ್ನೂ ಪುರುಸೊತ್ತಿರುವಾಗ ಓದಿ.

ಅಭಿಪ್ರಾಯ ತಿಳಿಸಿದರೆ ನನಗೆ ಖಂಡಿತ ಖುಶಿಯಾಗುವುದು.

ಆರು ಗ ಎ೦ಟುಗೊ! said...

"ಹೊನ್ನಿನದ್ದದಾದರೆ"- sariyo? :) Baaki olledaaydu appachi :)

Post a Comment