Saturday, January 2, 2010




ಸುಮ್ ಸುಮ್ನೇ ಎಬ್ಬಿಸಿದ್ದಾರೆ ಗುಲ್ಲು!
-----------------------------


ಹೇಳ್ತಾರೆ
..ಹೇಳ್ತಾರೆ..ಸುಮ್ನೇ,
ಸುಮ್ ಸುಮ್ನೇ..ಕಿಸಬಾಯಿ ದಾಸನ೦ತೆ.

ಬಯಸಿದ್ದೆಲ್ಲ ದೊರಕುವುದಿಲ್ಲ,ದೊರಕಿದ್ದೆಲ್ಲ ಬಯಸಿದ್ದಾಗಿರುವುದಿಲ್ಲ!
ಸುಳ್ಳು..ಸ್ವಾಮೀ ಸುಳ್ಳು.
ಸುಮ್ ಸುಮ್ನೇ ಎಬ್ಬಿಸಿದ್ದಾರೆ ಗುಲ್ಲು!

ಬುದ್ದಿ ತಿಳಿದಾಗಿನಿ೦ದ....ಯೊಚಿಸಿ ನೊಡಿ..
ನೀವು ನೆನೆಸಿದ್ದು..ಆಸೆ ಪಟ್ಟಿದ್ದು,
ಆಗಿಲ್ಲವೇನು ನನಸು?

ಹೈಸ್ಕೂಲು ಮುಗಿದರೆ ಸಾಕು,ಶಿಕ್ಶೆ-ಹೊಮ್ವರ್ಕ್,
ಬಿಟ್ಟು ಯೂನಿಫಾರ್ಮ್,ಅರಾಮ ಕಾಲೇಜು,ಹೇಳೊಲ್ಲ ಯಾರೂ,
ಓದು,ಬರಿ,ಬಾಯಿಪಾಟ,ಗೊಣಗಾಟ.ಆನ೦ದದಿ೦ದ ಕಳೆಯಲಿಲ್ಲವೇ
ಐದಾರುವರ್ಷ..ಜೀವನದ ಸುವರ್ಣಯುಗ!

ದುಡಿಮೆ ಆರ೦ಭಿಸಿದರೆ ಸಾಕು.ವೆಚ್ಚಕ್ಕೆ ಹೊನ್ನು,ಬೆಚ್ಚಕ್ಕೆ ಹೆಣ್ಣು,
ತಾರುಣ್ಯದ ಆಟ,ಸ್ನೇಹಿತರ ಕೂಟ...
ಇಚ್ಚೆಯರಿತು ಬಾಳುವ ಗ೦ಡು,ಹೆಣ್ಣಿನ
ನಮ್ಮಸ೦ಸಾರ...ಆಗಿಲ್ಲವೇ ಆನ೦ದ ಸಾಗರ?

ಸಾಲ ಮಾಡಿ ಕಟ್ಟಿದ ಮನೆಯಾದರೂ,ಉರಿದಿಲ್ಲವೇ ಹೊಟ್ಟೆ,ಅಕ್ಕಪಕ್ಕ ದವರಿಗೆ?
ಸಾಲಕ್ಕೊ,ಶ್ರಾಧ್ಧಕ್ಕೋ ಅ೦ತ ತಮಾಷೆ ಮಾಡುತ್ತಾ,ಪಡೆದ ಮಕ್ಕಳೆರಡೂ,
ಬದುಕಿನ ಪಯಣಕ್ಕೆ ಪಡೆಯಲಿಲ್ಲವೇ ಗಟ್ಟಿ ರೆಕ್ಕೆ!
ಜೀವನದ ಪಯಣದಲ್ಲಿ ಹೊರಳಿ ಮರಳಿ ನೊಡಿದರೆ

ನಿಜಕ್ಕೂ ಗಳಿಸಿದ್ದೇ ಅಧಿಕ,ಕಳೆದದ್ದು ಕ್ಷಣಿಕ.
ತು೦ಬಿದ ಮುಕ್ಕಾಲು ಪಾಲಿಗಿ೦ತಲೂ ಹೆಚ್ಚೇ?
ಖಾಲಿ ಕಾಲು ಪಾಲು?

ಸುಮ್ನೇ... ಸುಮ್ ಸುಮ್ನೇ..ಎಲ್ಲರೂ ಅಳ್ತಾರೆ೦ತ,
ಅಳ್ಬೇಕೆ..ನಾವು ನೀವೂನು?

"ರಾ" ಎ೦ದರೆ ರಾಮಾಯಣ ತಿಳಿವ,
ತಮಗೆ ಗೊತ್ತಿಲ್ಲದ್ದೇನು?..

~~~~~~~~~~~~

No comments:

Post a Comment