Sunday, October 24, 2010



ರೂಪಾಂತರ
-----------

ಬೀಜದೊಳಗಿದ್ದೆನೋ?
ಗೊತ್ತಿಲ್ಲ..
ಬೀಜ ಲಯವಾಗಿ
ಮೊಳಕೆ ಚಿಗುರಾದೆ.

ಚಿಗುರೊಳಗಿದ್ದೆನೋ?
ಗೊತ್ತಿಲ್ಲ..
ಚಿಗುರು ಚಿರುಟಿ
ಗಿಡವಾಗಿ ಮೇಲೆದ್ದೆ.

ಮೇಲೆ..ಮೇಲೆ
ಒಂದಕ್ಕೆ ಎರಡಾಗಿ
ಎರಡು ನೂರಾಗಿ
ಸಾವಿರಾರು ಟಿಸಿಲೊಡೆದು
ಲಕ್ಷ ಲಕ್ಷ ಎಲೆ ಬೆಳೆದು.

ಉದುರಿ ಉದುರಿ
ಮೆತ್ತೆ ಬೆಳೆಯುತ್ತಾ
ಹೂವಾಗಿ ಅರಳಿನಿಂತೆ..
ಅರಳಿ ಮುದುಡಿದ್ದೇ..
ಕಾಯಾದೆ..

ಕಾಯ ಕಹಿ/ದೊರಗು
ರುಚಿ ಕಳೆದು....
ರುಚಿತುಂಬಿ ಹಣ್ಣಾದೆ,ಜಗದ ಕಣ್ಣಾದೆ.

ಉದುರಿ ಅಲ್ಲಿಯೇ ಕೊಳೆತು
ಬೀಜವಾದೆ..
ಕಾಯುತ್ತಿರುವೆ ಎಂದಿಗೋ
ನನ್ನ ವಾಯಿದೆ???
--------------

25 comments:

Dr.D.T.Krishna Murthy. said...

ಒಳ್ಳೆಯ ಕವನ.ಅಭಿನಂದನೆಗಳು.

ಸೀತಾರಾಮ. ಕೆ. / SITARAM.K said...

ಅದ್ಬ್ಘುತವಾದ ಸೃಷ್ಠಿಕ್ರಿಯೆಯ ಪುನರಾವರ್ತನೆಯ ಚಿತ್ರಣ. ಬದುಕಲ್ಲಿ ಕಳೆಯುತ್ತಿರುವದರಲ್ಲಿ ಬೆಡಗಿನ ಹುಡುಕು ನೋಟ.

ನಾಗರಾಜ್ .ಕೆ (NRK) said...

Beautiful presentation of a Life Cycle.Thank You

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಜೀವನ ಚಕ್ರದಲ್ಲಿ ಎಲ್ಲರೂ ಸರದಿಗಾಗಿ ಕಾಯಲೇಬೇಕು.ಮತ್ತು ಬದುಕಬೇಕು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಡಾ.ಡಿ.ಟಿ.ಕೆ,ಸೀತಾರಾಮ್,ನಾಗರಾಜ್
ತಮ್ಮ ಪ್ರತಿಕ್ರೀಯೆಗೆ ವಂದನೆಗಳು.
ಕುಮಾರಣ್ಣಾ,
ಒಂದು ಅಳಿಯುವ(ಲಯವಾಗುವ) ಕ್ರೀಯೆಯ ಜೊತೆಯೇ ಇನ್ನೊಂದು ಹುಟ್ಟು ಅಡಗಿದೆ.
ಅಥವಾ ಒಂದು ಇಲ್ಲವಾಗದೆ ಇನ್ನೊಂದರ ಉದಯ ಇಲ್ಲವೇನೋ ಎಂದು ಅನಿಸುತ್ತದೆ.
ಹಾಗದರೆ ಒಂದು ಸ್ಥಿತಿಯ ನಾಶವೇ ಇನ್ನೊಂದು ರೂಪದ ತೋರ್ಪಡಿಕೆಗೆ ಸೋಪಾನವೇ?
ಕಾಯಿ ಹಣ್ಣಾಗುವುದೂ,ಕಾಯ ಹಣ್ಣಾಗುವುದೂ ಎರಡನ್ನೂ ಜೀವನ ಚಕ್ರದ ತಿರುಗುವಿಕೆಯನ್ನು ಸೂಚಿಸಲು ಬಳಸಿದ್ದೇನೆ.
ಮತ್ತು
ಇವೆಲ್ಲದಕ್ಕೂ ಒಂದು ವಾಯಿದೆ
(ಎಂದಿಗೆಂದು ಗೊತ್ತಿಲ್ಲದಿದ್ದರೂ) ಇದೆ ಖಂಡಿತ ಎನ್ನುವ ಆಶಾಭಾವದ ಆಶಯವನ್ನೂ ಈ ಕವನ ಹೊಂದಿದೆ ಎನ್ನುವುದು ಸಂತೋಷದ ಸಂಗತಿಯಲ್ಲವೇ?
ತಮ್ಮ ಆಪ್ತ ಪ್ರತಿಕ್ರೀಯೆಗೆ ವಂದನೆಗಳು.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಕೆ.ಕೆ.ಯವರೇ,ಕಾಯ,ಮತ್ತು ಕಾಯುವ (ವಾಯಿದೆ)ಪ್ರಕ್ರಿಯೆ ಜೀವನ ಚಕ್ರದಲ್ಲಿ ಚಕ್ರದ೦ತೆಯೆ.ಈ ಮಧ್ಯದಲ್ಲಿ ರೂಪಾ೦ತರ ಪ್ರಕಿಯೆಗಳೆಲ್ಲ ನಡೆಯಬೇಕು.ಹಾಗಾಗಿಯೇ ತತ್ವಾರ್ಥದಲ್ಲಿ"ಮತ್ತು ಬದುಕಬೇಕು." ಎ೦ದಿದ್ದು.ಹಾಗಿದ್ದಲ್ಲಿಯೇ ಪೂರ್ಣತ್ವವಲ್ಲವೇ....?

Vinay.S said...

ವೆಂಕಟ್ ಸರ್, ಕವಿತೆ ಸುಂದರವಾಗಿದೆ. ಬದುಕು ಬಹುರೂಪಿ. ರೂಪವಷ್ಟೇ ಬದಲಾಗಿದೆ, ಮತ್ತೊಂದು ಹೊಸ ರೂಪದ ಕೃತಿಯೊಂದಿಗೆ...!

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

simple na superb sir;)

ಜಲನಯನ said...

ವೆ.ಕಿ.ಬೆಳವಣಿಗೆ ಮತ್ತೆ ಆಶಯ ಹೇಗೆ ಮೇಳೈಸುತ್ತೆ ಪರಿಸರದೊಡನೆ ಅನ್ನೋ ಸೂಕ್ಷ್ಮವನ್ನು ಚನ್ನಾಗಿ ಕವನಿಸಿದ್ದೀರಿ...

ಮನಸಿನಮನೆಯವನು said...

ಉತ್ತಮ ಕವಿತೆ..
ನನ್ನ 'ಮನಸಿನಮನೆ'ಗೂ ಬನ್ನಿ.

ಅಪ್ಪ-ಅಮ್ಮ(Appa-Amma) said...

ಜೀವನ ಚಕ್ರ ಒಂದು ಬೀಜದ ಮೂಲಕ ಸೊಗಸಾಗಿ ಹೊಮ್ಮಿದೆ.
ಸುಂದರ ಕವನಕ್ಕೆ ವಂದನೆಗಳು

Asha said...

kavite chennagide...

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ವಿನಯ್,
ನನ್ನ ಮನದ ಭಾವಕ್ಕೆ ಕನ್ನಡಿ ಹಿಡಿದಾಗ,
ಜಲನಯನ,
ಕತ್ತಲೆ ಮನೆ,
ಅಪ್ಪ-ಅಮ್ಮ,
ವಸಂತ್,
ಆಶಾ,
ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು.
ನನ್ನ ಹಳೆಯ ಕವನಗಳ ಕಡೆಗೂ ಕಣ್ಣು ಹಾಯಿಸಿ...

Unknown said...

Superb!!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಧನ್ಯವಾದಗಳು ಗೋರೆ ಸರ್..

ಮನಮುಕ್ತಾ said...

very nice..!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

Tanks..Manamuktaaa..

ವಾಣಿಶ್ರೀ ಭಟ್ said...

nice one!!!!!

Soumya said...

ಕವನ ಚೆನ್ನಗಿದೆ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ವಾಣಿಶ್ರೀ,ಸೌಮ್ಯಾ.,

ತಮ್ಮ ಮೆಚ್ಚುಗೆಗೆ ನನ್ನಿ...

KalavathiMadhusudan said...

beejada saarthakateyanna kavanadalli bahala sogasaagi bimbisiddeera.abhinandanegalu.

Anonymous said...

ಪುಟ್ಟ ಪುಟ್ಟ ಪದದಲ್ಲಿ ಕಟ್ಟಿದ ಕವಿತೆ ಪುಟ್ಟದಾದ ಬದುಕನ್ನು ಎಚ್ಚರಿಸುವಂತಿದೆ

ಸಾಗರದಾಚೆಯ ಇಂಚರ said...

Sir

chennagide kavite

putta padagallali kattita putta kavite, abhinandane nimage

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಜಿ.ಎಸ್.ಕಲಾವತೀ,ಚುಕ್ಕಿ ಚಂದಿರ,ಡಾ.ಗುರುಮೂರ್ತಿ ಸರ್,
ತಮ್ಮ ಸಾಹಿತ್ಯದಾಸಕ್ತಿಗೆ ವಂದನೆಗಳು..
ಆಗಾಗ ಬರ್ತಾಇರಿ.

Rajendra Halemane said...

ಕವನ, ಬರೆದ ಕವಿಯ೦ತೆ ಚೆನ್ನಾಗಿದೆ.

Post a Comment