Sunday, July 4, 2010



ಯಾರ ಕೃಪೆಯ,
ಯಾವಕಾಲದ ಮಹಲೋ?
--------------

ಸಾವಿರದ ಸಮಸ್ಯೆಗಳಿಗೆ,
ಪರಿಹಾರ
ಎಲ್ಲರಿಗೂ....ಎಲ್ಲ ಕಾಲಕ್ಕೂ ಎಲ್ಲೆಡೆಯೂ,
(ಕಾಲ ದೇಶಾತೀತವಾಗಿ)
ದೊರಕಿದ್ದರೆ....
ಇಲ್ಲೇ ಅಲ್ಲವೇ?

ಕಾಲ! ಅಹಾ,
ಅದೆಂತಹ ಕಲ್ಪನೆ!
ಪ್ರಕೃತಿಯೊಂದಿಗಿನ ಸಹಬಾಳ್ವೆಗಾಗಿ
ಹಗಲು ರಾತ್ರಿಯ ಚಕ್ರಕ್ಕೆ
ಎಣಿಕೆ ಬರೆಯುವ ಹುಚ್ಚಿನಲ್ಲಿ
ಕಟ್ಟಿಕೊಂಡ ಸುಂದರ ಮಹಲು!

ಇಲ್ಲಿ ಪಹರಿಗಳಿಲ್ಲ, ಒಡೆಯರೂ ಇಲ್ಲ.
ಗೊತ್ತಿಲ್ಲದ ಯಜಮಾನನ ಮಾಲಕತ್ವ ಒಪ್ಪಿ
ಸಾಗಿದೆ ಬದುಕು..ನಿರಾತಂಕ,ನಿರುಮ್ಮುಳ!

ಇಲ್ಲಿ ಬೀಸುವ ಗಾಳಿಗೆ,
ಬೆಳದಿಂಗಳಿನ ಸುಖ ನಿದ್ದೆಗೆ,
ಎಲ್ಲ ಮರೆಯುವ ಮರೆಸುವ
ಅದೆಂತಹ ಶಕ್ತಿ!

ಸಮಯದ ನಾಡಿ ಹಿಡಿದು
ಹೊತ್ತು ಹೊತ್ತಿಗೆ,
ಬೇಕಾದ ಎಲ್ಲವ...
ಬೇರಾರಿಗೂ ಇಲ್ಲವೆನ್ನುವಷ್ಟು ನೀಡಿ,
ನೋವ ನೀವುತ್ತ ಮನವ ಮುದಗೊಳಿಸಿ..ಮುದ್ದಿಸಿ,
ಶಕ್ತಿತುಂಬುವ
ಅದ್ಭುತ ಮಹಲು!

ಸವೆಸಲೇಬೇಕಾದ ಬದುಕಿಗೆ
ಸಾಸಿವೆಯಷ್ಟೂ ಕೊರತೆಯಾಗದಂತೆ...
ಅದೆಷ್ಟು ಲೆಕ್ಕಾಚಾರ..
ಯೋಚಿಸಬೇಕಾದ್ದಿಲ್ಲ..
ಒಡೆಯನಿಗೊಪ್ಪಿಸಿಕೊಂಡರಾಯಿತು!

ಇಷ್ಟು ನಿಶ್ಚಿಂತೆಯ
ಮನೆಯ ಮಡಿಲು ದೊರಕಿದ್ದು
ಯಾರ ಕೃಪೆಯೋ??
---------------

23 comments:

ಸಾಗರದಾಚೆಯ ಇಂಚರ said...

ಸರ್
ಸವೆಸಲೇಬೇಕಾದ ಬದುಕಿಗೆ
ಸಾಸಿವೆಯಷ್ಟೂ ಕೊರತೆಯಾಗದಂತೆ...
ಅದೆಷ್ಟು ಲೆಕ್ಕಾಚಾರ..
ಯೋಚಿಸಬೇಕಾದ್ದಿಲ್ಲ..
ಒಡೆಯನಿಗೊಪ್ಪಿಸಿಕೊಂಡರಾಯಿತು!

ಎಂತಾ ಸಾಲುಗಳು

ಮನದಾಳದಿಂದ............ said...

VK ಸರ್,
ಕವನ ಚನ್ನಾಗಿದೆ.
" ಕಾಲನ ಮಹಲಲ್ಲಿ ಪಹರೆಗಳಿಲ್ಲ, ಒಡೆಯರಿಲ್ಲ! ಗೊತ್ತಿಲ್ಲದ ಯಜಮಾನನ ಮಾಲಕತ್ವ ಒಪ್ಪಿ ಸಾಗಿದೆ ಬದುಕು..ನಿರಾತಂಕ,ನಿರುಮ್ಮುಳ"
ಸುಂದರ ಸಾಲುಗಳು.

Subrahmanya said...

ಆಹಾ ! ಎಂತಹ ಮಾರ್ಮಿಕವಾದ ಕವನ !. ’ಅರ್ಥಗಳು’ ಹೊರಹೊಮ್ಮುತ್ತಿವೆ.
ಯಾರ ಬದುಕು ಎಲ್ಲೋ ? ಹೇಗೋ ? ಅದು ಹಾಗೆ .

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಗುರುಮೂರ್ತಿಯವರೇ,ಪ್ರವೀಣ್ರವರೇ,
ಧನ್ಯವಾದಗಳು.
ಕಳೆದ ಒಂದೂವರೆ ತಿಂಗಳಿಂದ ವೈಯಕ್ತಿಕ ಕಾರಣಗಳಿಂದ ಬ್ಲಾಗ್ ಕಡೆ ಬರಲಾಗಲಿಲ್ಲ.
ಈಗ ಮತ್ತೆ ಹವ್ಯಾಸದ ಈಕಣಕ್ಕೆ ಮರಳಿದ್ದೇನೆ..

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸುಬ್ರಮಣ್ಯ ಭಟ್ರೆ....ವಂದನೆಗಳು

Snow White said...

tumba chennagive sir saalugalu.. :)tumba ista aitu :)

Anonymous said...

nice poem. thanks -girisha

Dr.D.T.Krishna Murthy. said...

ವೆಂಕಟಕೃಷ್ಣ;ನಮಸ್ಕಾರ.ಕವನ ಚೆನ್ನಾಗಿದೆ.ಬ್ಲಾಗಿಗೆ ಬನ್ನಿ.ಧನ್ಯವಾದಗಳು.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಬಿಳಿಯ ಹಿಮಕ್ಕೂ..
ಗಿರೀಶರಿಗೂ..
ವಂದನೆಗಳು.

V.R.BHAT said...

Liked it, nice

Raghu said...

nice one.

ಸೀತಾರಾಮ. ಕೆ. / SITARAM.K said...

ಚೆಂದ ಆಶಯದ ಕವನ "ಒಡೆಯನಿಗೊಪ್ಪಿಸಿಕೊಂಡರಾಯಿತು" ಚೆ೦ದದ ಅಭಿವ್ಯಕ್ತಿ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ವಿ.ಆರ್.ಭಟ್,
ರಘು,
ಸೀತಾರಾಮ್,
ನಿಮಗೆಲ್ಲ ವಂದನೆಗಳು.

Jyoti Hebbar said...

ಪ್ರತೀ ಸಾಲೂ ಸುಂದರ.. ತುಂಬ ಒಳ್ಳೆಯ ಕವನ

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಚೆ೦ದದ ಕವನಕ್ಕೆ ಅಭಿನ೦ದನೆ.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ವಸಂತ್ , ಜ್ಯೋತಿ, ಮುಳಿಯಾಲ
ತಮ್ಮ ಪ್ರತಿಕ್ರೀಯೆಗೆ ವಂದನೆಗಳು.

ವಿ ಡಿ ಭಟ್ ಸುಗಾವಿ said...

sundaravada salugalu http://vdbhatsugavi.blogspot.com klik madi nodi

Unknown said...

ಇದು ತಾಯಿಯ ಮಡಿಲಲ್ಲಿ ಮಾತ್ರ
ಉತ್ತಮ ಕವನ

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಪಂಪಾವನದ ಭಟ್ರಿಗೆ
ಹಾಗೂ
ಬೆಳ್ಳಾಲ ಗೋಪಿನಾಥ ರಾಯರಿಗೆ
ವಂದನೆಗಳು..

Olave Namma Baduku said...

Sreeutha Venkata avarige,

Kaalada kavanada prayathnakke abhinandanehgalu!

Nannannu nimma bolgge suggest maadidhakke dhanyavadagalu!

Shubhashayagalondige,
Adarsha Mavinakuli!

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಧನ್ಯವಾದಗಳು..ಮಾವಿನಕುಳಿಯವರಿಗೆ....

Anonymous said...

ತು೦ಬ ಅರ್ಥವಿರುವ ಕವನ. ಇದನ್ನು ಅಳವಡಿಸಿದರ೦ತೂ ಬದುಕು ನಿರರ್ಗಳವಾದೀತು.

sahana bhat said...

tumbaa chennagi moodi bandide kavanada saalugalu.. abhinandanegalu..!

Post a Comment